Karnataka logo

Karnataka Tourism
GO UP

ದರಿಯಾ ದೌಲತ್ ಬಾಗ್

separator
ಕೆಳಗೆ ಸ್ಕ್ರಾಲ್ ಮಾಡಿ

ದರಿಯಾ ದೌಲತ್ ಬಾಗ್ ಶ್ರೀರಂಗಪಟ್ಟಣ ಕೋಟೆಯ ಬಳಿ ಟಿಪ್ಪು ಸುಲ್ತಾನರ ಬೇಸಿಗೆಯ ಅರಮನೆ ಆಗಿತ್ತು. ದರಿಯಾ ದೌಲತ್ ಬಾಗ್ ಎಂಬ ಹೆಸರು ಸಂಪತ್ತಿನ ಸಮುದ್ರವನ್ನು ಹೊಂದಿರುವ ಉದ್ಯಾನವನ್ನು ಸೂಚಿಸುತ್ತದೆ. ದರಿಯಾ ದೌಲತ್ ಬಾಗ್‌ನ ಮುಖ್ಯ ಅರಮನೆ ಕಟ್ಟಡವು ತೇಗದ ಮರದಿಂದ ಮಾಡಲ್ಪಟ್ಟಿದೆ ಮತ್ತು ಸುಂದರವಾದ ಉದ್ಯಾನಗಳಿಂದ ಸುತ್ತುವರೆದಿದೆ.

ದರಿಯಾ ದೌಲತ್ ಬಾಗನ್ನು ಟಿಪ್ಪು ಸುಲ್ತಾನ್ 1784 ರಲ್ಲಿ ನಿರ್ಮಿಸಿದ. ದರಿಯಾ ದೌಲತ್ ಬಾಗ್ ಅನ್ನು ಇಂಡೋ-ಸರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಆಯತಾಕಾರದ ಎತ್ತರದ ಪಾಯದ ಮೇಲೆ ನಿರ್ಮಿಸಲಾಗಿದೆ. ದರಿಯಾ ದೌಲತ್  ಬಾಗ್ ನ ಗೋಡೆಗಳು ವರ್ಣಚಿತ್ರಗಳು ಮತ್ತು ಭಾವಚಿತ್ರಗಳಿಂದ ಸಮೃದ್ಧವಾಗಿವೆ. ಮರದ ಛಾವಣಿಯನ್ನು ಹೂವಿನ ಮಾದರಿ ಮತ್ತು ವರ್ಣಚಿತ್ರಗಳಿಂದ ಅಲಂಕರಿಸಲಾಗಿದೆ.

ಪ್ರಮುಖ ಆಕರ್ಷಣೆಗಳು 

  • ಆಂಗ್ಲೋ-ಮೈಸೂರು ಯುದ್ಧದ ದೃಶ್ಯಗಳ ವಾಲ್ ಪೇಂಟಿಂಗ್ಸ್
  • ಫ್ರೆಂಚ್, ಬ್ರಿಟಿಷ್, ಮರಾಠಾ ಮತ್ತು ನಿಜಾಮ್ ಸೈನ್ಯದಿಂದ ಸಮಕಾಲೀನ ಮಿಲಿಟರಿ ದೃಶ್ಯಗಳು
  • ಮಿಲಿಟರಿ ಆಡಳಿತಗಾರರೊಂದಿಗೆ ಸಂವಹನ ನಡೆಸುತ್ತಿರುವ ಸ್ಥಳೀಯ ಪಾಳೆಯಗಾರರ ಭಾವಚಿತ್ರಗಳು
  • ಟಿಪ್ಪು ಸುಲ್ತಾನ್ ಅವರ ವೈಯಕ್ತಿಕ ವಸ್ತುಗಳ ಸಂಗ್ರಹಾಲಯ: ನಾಣ್ಯಗಳು, ರಾಜ ಪೋಷಾಕು, ಶಸ್ತ್ರಾಸ್ತ್ರಗಳು ಮತ್ತು ವರ್ಣಚಿತ್ರಗಳ ಸಂಗ್ರಹವಿದೆ. ಮೈಸೂರಿನೊಂದಿಗೆ ಪರ್ಷಿಯಾ, ಯುರೋಪ್ ಮತ್ತು ಇತರ ದೂರದ ಸ್ಥಳಗಳೊಂದಿಗೆ ವ್ಯಾಪಾರ ವ್ಯವಹಾರ ಕುರಿತ ಹಲವಾರು ಹಸ್ತಪ್ರತಿಗಳು ಮತ್ತು ಕಲಾಕೃತಿಗಳನ್ನು ಕಾಣಬಹುದು.
  • 1800 ರಲ್ಲಿ ರಾಬರ್ಟ್ ಕೆರ್ ಪೋರ್ಟರ್ ರಚಿಸಿದ “ಶ್ರೀರಂಗಪಟ್ಟಣಂನ ಮೇಲಿನ ಅಂತಿಮ ದಾಳಿ” ಪ್ರದರ್ಶನದಲ್ಲಿರುವ ಪ್ರಮುಖ ಚಿತ್ರಕಲೆ.

ತಲುಪುವುದು ಹೇಗೆ: ಶ್ರೀರಂಗಪಟ್ಟಣವು ಬೆಂಗಳೂರು ನಗರದಿಂದ 135 ಕಿ.ಮೀ ಮತ್ತು ಮೈಸೂರಿನಿಂದ 14 ಕಿ.ಮೀ ದೂರದಲ್ಲಿದೆ (ಹತ್ತಿರದ ವಿಮಾನ ನಿಲ್ದಾಣ). ಶ್ರೀರಂಗಪಟ್ಟಣದಲ್ಲಿ ರೈಲ್ವೆ ನಿಲ್ದಾಣವಿದೆ ಮತ್ತು ಬೆಂಗಳೂರು ಮತ್ತು ಮೈಸೂರಿನಿಂದ ಅತ್ಯುತ್ತಮ ಬಸ್ ಸಂಪರ್ಕವಿದೆ.

ವಸತಿ: ಕೆಎಸ್‌ಟಿಡಿಸಿ ಶ್ರೀರಂಗಪಟ್ಟಣದಲ್ಲಿ ಹೋಟೆಲ್ ಮಯೂರ ರಿವರ್ ವ್ಯೂ ನಡೆಸುತ್ತಿದೆ. ಮೈಸೂರು ನಗರ, (ಶ್ರೀರಂಗಪಟ್ಟಣದಿಂದ 14 ಕಿ.ಮೀ) ಇನ್ನಷ್ಟು ವಸತಿ ಸೌಕರ್ಯಗಳನ್ನು ಹೊಂದಿದೆ.

Tour Location

Leave a Reply

Accommodation
Meals
Overall
Transport
Value for Money