Karnataka logo

Karnataka Tourism
GO UP

ಜಮಲಾಬಾದ್ ಕೋಟೆ

separator
ಕೆಳಗೆ ಸ್ಕ್ರಾಲ್ ಮಾಡಿ

ಗಡಾಯಿ ಕಲ್ಲು ಎಂದೂ ಕರೆಯಲಾಗುವ ಜಮಲಾಬಾದ್ ಕೋಟೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿದೆ. 18 ನೇ ಶತಮಾನದ ಈ ಕೋಟೆ ಕೋಟೆ ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. 

ಇತಿಹಾಸ: ಹಳೆಯ ಹೊಯ್ಸಳ ಕೋಟೆಯ ಅವಶೇಷಗಳ ಮೇಲೆ ಜಮಲಾಬಾದ್ ಕೋಟೆಯನ್ನು ನಿರ್ಮಿಸಲಾಗಿದೆ. ಮೈಸೂರು ದೊರೆ ಟಿಪ್ಪು ಸುಲ್ತಾನ್ 1974 ರಲ್ಲಿ ಕೋಟೆಯನ್ನು ನಿರ್ಮಿಸಿ ಅದಕ್ಕೆ ಅವರ ತಾಯಿ ಜಮಲಾಬಾಯಿಯ ಹೆಸರಿಟ್ಟರು.

ಜಮಲಾಬಾದ್ ಕೋಟೆಯ ಮುಖ್ಯಾಂಶಗಳು:

  • ವಿಹಂಗಮ ನೋಟಗಳು: ಜಮಾಲಾಬಾದ್ ಕೋಟೆಯ ಮೇಲ್ಭಾಗವು ಪರ್ವತಗಳು, ಕೃಷಿ ಕ್ಷೇತ್ರ,  ನದಿಗಳು ಮತ್ತು ಕಣಿವೆಯ ವಿಹಂಗಮ ನೋಟಗಳನ್ನು ನೀಡುತ್ತದೆ.
  • ಕಲ್ಲಿನ ಮೆಟ್ಟಿಲುಗಳು : ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಜಮಾಲಾಬಾದ್ ಕೋಟೆಯನ್ನು ಪ್ರವೇಶಿಸಬಹುದು
  • ಹಳೆಯ ಜೈನ ಬಸದಿ: ಜಮಲಾಬಾದ್ ಕೋಟೆ ಹೋಗುವ ದಾರಿಯಲ್ಲಿ ಪರ್ಮಣ್ಣು ಗ್ರಾಮದಲ್ಲಿದೆ.

ಋತು: ಅಕ್ಟೋಬರ್‌ನಿಂದ ಮೇ ನಡುವೆ ಮಾತ್ರ ಜಮಾಲಾಬಾದ್ ಕೋಟೆಗೆ ಪ್ರವೇಶಿಸಲು ಅನುಮತಿ ಇದೆ. ಮಳೆಗಾಲದಲ್ಲಿ ಬಂಡೆಗಳು ತುಂಬಾ ಜಾರುತ್ತವೆ ಮತ್ತು ಈ ಕಾರಣ ಏರಲು ಅಪಾಯಕಾರಿಯಾಗಿದೆ. 

ತಲುಪುವುದು ಹೇಗೆ: ಜಮಲಾಬಾದ್ ಕೋಟೆಯನ್ನು ಪ್ರವೇಶಿಸಲು ಹತ್ತಿರದ ಹಳ್ಳಿ ನಡು. ನಡು ಬೆಳ್ತಂಗಡಿ  ತಾಲ್ಲೂಕಿನ ಜಮಾಲಾಬಾದ್ ಕೋಟೆಯಿಂದ 4 ಕಿ.ಮೀ ದೂರದಲ್ಲಿದೆ. ನಡು ಬೆಂಗಳೂರಿನಿಂದ 312 ಕಿ.ಮೀ ಮತ್ತು ಮಂಗಳೂರಿನಿಂದ 64 ಕಿ.ಮೀ. ದೂರದಲ್ಲಿದೆ. ಪುತ್ತೂರಿನ ಕಬಕ ಜಂಕ್ಷನ್ ಹತ್ತಿರದ ರೈಲ್ವೆ ನಿಲ್ದಾಣ (44 ಕಿ.ಮೀ) ಮತ್ತು ಮಂಗಳೂರು ಹತ್ತಿರದ ವಿಮಾನ ನಿಲ್ದಾಣ (70 ಕಿ.ಮೀ ದೂರ)

ಉಳಿಯಿರಿ: ಬೆಳ್ತಂಗಡಿ ಪಟ್ಟಣ (ನಡುವಿಂದ 5 ಕಿ.ಮೀ) ಕೆಲವು ಬಜೆಟ್ ಹೋಟೆಲ್‌ಗಳನ್ನು ಹೊಂದಿದೆ. ನಡುವಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಮೂಡುಬಿದ್ರಿ, ಬಂಟ್ವಾಳ ಮತ್ತು ಪುತ್ತೂರು ಪಟ್ಟಣಗಳಲ್ಲಿ ಹೆಚ್ಚಿನ ಆಯ್ಕೆಗಳು ಲಭ್ಯವಿದೆ.

Tour Location

Leave a Reply

Accommodation
Meals
Overall
Transport
Value for Money