Karnataka logo

Karnataka Tourism
GO UP

ಇಕ್ಕೇರಿ ಅಘೋರೇಶ್ವರ ದೇವಸ್ಥಾನ

separator
ಕೆಳಗೆ ಸ್ಕ್ರಾಲ್ ಮಾಡಿ

ಇಕ್ಕೇರಿ ಅಘೋರೇಶ್ವರ ದೇವಸ್ಥಾನ

ಇಕ್ಕೇರಿ ದೇವಸ್ಥಾನ, ಶಿವಮೊಗ್ಗ

ಕರ್ನಾಟಕದ ಮಲೆನಾಡು ಪ್ರದೇಶದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಇಕ್ಕೇರಿ ಎಂಬ ಚಿಕ್ಕ ಮತ್ತು ಪಾರಂಪರಿಕ ಗ್ರಾಮವು ಐತಿಹಾಸಿಕವಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಗರದಿಂದ ಕೇವಲ 6 ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಶಿವನಿಗೆ ಅರ್ಪಿತವಾಗಿರುವ ಅಘೋರೇಶ್ವರ ಎಂಬ ಪ್ರಸಿದ್ಧವಾದ ದೇವಸ್ಥಾನವಿದೆ.
ಇದು ಕೆಳದಿ ನಾಯಕರ ಹಿಂದಿನ ರಾಜಧಾನಿ ಆಗಿತ್ತು, ಕನ್ನಡ ಭಾಷೆಯಲ್ಲಿ ಇಕ್ಕೇರಿ ಪದ ಎಂದರೆ ‘ಎರಡು ಬೀದಿಗಳು’ ಎಂದರ್ಥ. ಇಕ್ಕೇರಿಯು 16-17ನೇ ಶತಮಾನದಲ್ಲಿ ಆಗಿನ ಅರಸರಾದ ಕೆಳದಿ ನಾಯಕ ರಾಜವಂಶದ ರಾಜಧಾನಿಯಾಗಿತ್ತು. ಅಘೋರೇಶ್ವರ ಎಂದು ಕರೆಯಲ್ಪಡುವ ಈ ಪುರಾತನ ಪರಂಪರೆಯ ದೇವಾಲಯವು ನಿರ್ಮಾಣಗೊಂಡ ಹಲವು ವರ್ಷಗಳ ನಂತರವೂ ಅದರ ವೈಭವದ ಗತಕಾಲದ ಬಗ್ಗೆ ಸಾಕಷ್ಟು ಹೇಳುತ್ತದೆ.ಹೇರಳವಾಗಿ ಲಭ್ಯವಿರುವ ಜನಪ್ರಿಯ ಕಲ್ಲಿನ ಗ್ರಾನೈಟ್‌ನಿಂದ ನಿರ್ಮಿಸಲಾದ ಈ 16 ನೇ ಶತಮಾನದ ದೇವಾಲಯವು ವಿಜಯನಗರ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ವಿಶಿಷ್ಟ ಮಿಶ್ರಣವಾಗಿದೆ. ಇಲ್ಲಿ ಪಾರ್ವತಿ, ಅಘೋರೇಶ್ವರ, ನಂದಿ ಮೂರು ದೇವಾಲಯಗಳಿವೆ. ಭಗವಾನ್ ಶಿವನನ್ನು ಮುಖ್ಯ ದ್ವಾರದಲ್ಲಿ ಎರಡು ಆನೆಗಳೊಂದಿಗೆ ಮುಖ್ಯ ಸಭಾಂಗಣ ಅಥವಾ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯವು ಶಕ್ತಿ ಪೀಠಗಳು ಎಂದೂ ಕರೆಯಲ್ಪಡುವ 32 ಸ್ತ್ರೀ ದೇವತೆಗಳಿಂದ ಸುತ್ತುವರಿದಿದೆ. ಈ ಶಕ್ತಿ ಪೀಠಗಳು ದುರ್ಗಾ ದೇವಿಯ ರೂಪಗಳಾಗಿವೆ. ಇತರ ಅನೇಕ ದೇವಾಲಯಗಳಂತೆ ಇಲ್ಲಿಯೂ ಸಹ ನೀವು ಗಣೇಶನ ಪ್ರತಿಮೆಯನ್ನು ಕಾಣಬಹುದು.

ಇಕ್ಕೇರಿ ದೇವಸ್ಥಾನದಲ್ಲಿ ನಂದಿ

ಇಕ್ಕೇರಿ ದೇವಸ್ಥಾನವು ಅಘೋರೇಶ್ವರ ದೇವಸ್ಥಾನ ಎಂದು ಪ್ರಸಿದ್ಧವಾಗಿದೆ. ಈ ದೇವಾಲಯಗಳು ಅತ್ಯುತ್ತಮವಾದ ಕರಕುಶಲತೆ ಮತ್ತು ವಾಸ್ತುಶಿಲ್ಪದ ಪರಿಪೂರ್ಣತೆಗೆ ಸಾಕ್ಷಿಯಾಗಿದೆ. ಪ್ರವಾಸಿಗರು ಈ ದೇವಾಲಯಗಳಿಗೆ ಭೇಟಿ ನೀಡಲೇ ಬೇಕು.


ಇಕ್ಕೇರಿ ದೇವಸ್ಥಾನದಲ್ಲಿರುವ ಶಿವಲಿಂಗವು ಸ್ವಯಂಉದ್ಭವವಾದ ಲಿಂಗವಾಗಿದೆ. ಇಕ್ಕೇರಿಯು ಕ್ರಿ.ಶ.1560ರಿಂದ 1640ರ ಅವಧಿಯಲ್ಲಿ ಕೆಳದಿ ನಾಯಕರ ಅಧೀನದಲ್ಲಿತ್ತು. ಹೈದರ್ ಅಲಿ ಆಕ್ರಮಣ ಮಾಡುವವರೆಗೂ ಕೆಳದಿ ನಾಯಕರು ಒಂದು ಶತಮಾನಕ್ಕೂ ಹೆಚ್ಚು ಕಾಲ ಮಲೆನಾಡು ಪ್ರದೇಶದಲ್ಲಿ ಬಲವಾದ ಹಿಡಿತವನ್ನು ಹೊಂದಿದ್ದರು.
ಪುರಾತನ ದೇವಾಲಯವು ಈಗ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ನಿರ್ವಹಣೆಯಲ್ಲಿದೆ. ಹೊರಗೋಡೆಗಳ ಮೇಲೆ ಮತ್ತು ದೇವಾಲಯದ ಗೋಡೆಯ ಒಳಗೆ ಒಂದು ಸೊಗಸಾದ ಮತ್ತು ಸಂಕೀರ್ಣವಾದ ಕೆತ್ತನೆಯು ಆ ಕಾಲದ ಅತ್ಯುತ್ತಮ ಕರಕುಶಲತೆ ಮತ್ತು ವಾಸ್ತುಶಿಲ್ಪದ ವೈಭವವನ್ನು ಪ್ರದರ್ಶಿಸುತ್ತದೆ.

ಭೇಟಿ ನೀಡಲು ಉತ್ತಮ ಸಮಯ

ನೀವು ಈ ಪ್ರಶಾಂತವಾದ ದೇವಾಲಯಕ್ಕೆ ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು. ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್‌ನಿಂದ ಫೆಬ್ರವರಿ. ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ತಾಪಮಾನವು ಉಳಿದ ತಿಂಗಳುಗಳಿಗಿಂತ ತುಲನಾತ್ಮಕವಾಗಿ ಉತ್ತಮವಾಗಿರುತ್ತದೆ.

ತಲುಪುವುದು ಹೇಗೆ?


ಶಿವಮೊಗ್ಗದಿಂದ ರಸ್ತೆ ಸಾರಿಗೆ ಮೂಲಕ ಇಕ್ಕೇರಿಯನ್ನು ತಲುಪಬಹುದು.ಸಾಗರ ಇದಕ್ಕೆ ಹತ್ತಿರ ಇರುವ ನಗರವಾಗಿದೆ. ಶಿವಮೊಗ್ಗ ಜಿಲ್ಲಾ ಕೇಂದ್ರವು ಸಾಗರ ಮತ್ತು ಇಕ್ಕೇರಿಗೆ ತಲುಪಲು ಹತ್ತಿರದ ಪ್ರಮುಖ ನಗರವಾಗಿದೆ.

ವಿಮಾನದ ಮೂಲಕ

ಸುಮಾರು 142 ಕಿಮೀ ದೂರದಲ್ಲಿರುವ ಮಂಗಳೂರು ಹತ್ತಿರದ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ವಿಮಾನ ನಿಲ್ದಾಣವು ಸುಮಾರು 350 ಕಿ.ಮೀ ದೂರದಲ್ಲಿದೆ. ಸಾಗರ್ ಮತ್ತು ದೇವಸ್ಥಾನವನ್ನು ತಲುಪಲು ಕ್ಯಾಬ್‌ಗಳು ಅಥವಾ ರಾಜ್ಯ-ಚಾಲಿತ ಬಸ್‌ಗಳನ್ನು ಬಳಸಬಹುದು.

ರೇಲ್ವೆ ಮೂಲಕ

ಸಾಗರ್ ಹತ್ತಿರದ ರೈಲು ನಿಲ್ದಾಣ್ ಆಗಿದ್ದು ಇದು ಪಟ್ಟಣವನ್ನು ಕರ್ನಾಟಕದ ವಿವಿಧ ನಗರಗಳು ಮತ್ತು ಪಟ್ಟಣಗಳೊಂದಿಗೆ ರೇಲ್ವೆ ಸಂಪರ್ಕವನ್ನು ಹೊಂದಿದೆ. ಶಿವಮೊಗ್ಗ, ಹತ್ತಿರದ ದೊಡ್ಡ ರೈಲು ನಿಲ್ದಾಣವಾಗಿದ್ದು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಕ್ಕೇರಿ ದೇವಸ್ಥಾನವನ್ನು ತಲುಪಲು ಸಾಗರ್ ರೈಲು ನಿಲ್ದಾಣದಿಂದ ಆಟೋ-ರಿಕ್ಷಾಗಳನ್ನು ಬಾಡಿಗೆಗೆ ಪಡೆಯಬಹುದು.

ರಸ್ತೆ ಸಾರಿಗೆ ಮೂಲಕ

ಸಾಗರ ಮತ್ತು ಶಿವಮೊಗ್ಗ ಪಟ್ಟಣಗಳಿಂದ ದೇವಸ್ಥಾನದ ಸಮೀಪಕ್ಕೆ ಸಾರ್ವಜನಿಕ ಸಾರಿಗೆ ಲಭ್ಯವಿದೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಮತ್ತು ಕ್ಯಾಬ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದೆ.

ಹತ್ತಿರ ಇರುವ ಪ್ರಸಿದ್ಧ ಸ್ಥಳಗಳು

ನೀವು ಇಲ್ಲಿಗೆ ಭೇಟಿ ನೀಡಿದಾಗ ಈ ಪ್ರದೇಶದ ಸುತ್ತಮುತ್ತಲಿರುವ ಪ್ರಸಿದ್ಧ ಸ್ಥಳಗಳನ್ನು ನೋಡಲು ಮರೆಯದಿರಿ. ಮುರುಡೇಶ್ವರ ದೇವಸ್ಥಾನ, ಕೆಳದಿ ದೇವಸ್ಥಾನ, ಜೋಗ್ ಫಾಲ್ಸ್, ಸಕ್ರೆಬೈಲ್ ಎಲಿಫೆಂಟ್ ಕ್ಯಾಂಪ್, ಕೊಡಚಾದ್ರಿ ಹಿಲ್ಸ್, ಮಾಲ್ಗುಡಿ ಡೇಸ್ ಸ್ಟೇಷನ್ ಮತ್ತು ಇನ್ನೂ ಹೆಚ್ಚಿನವು ಇಲ್ಲಿನ ಸುತ್ತಮುತ್ತಲಿನ ಇತರ ಆಸಕ್ತಿದಾಯಕ ಸ್ಥಳಗಳಾಗಿವೆ.

ಹೆಚ್ಚಿನ ಮಾಹಿತಿ:

1. ನೀವು ಈ ದೇವಸ್ಥಾನಕ್ಕೆ ಯಾವಾಗಲಾದರೂ ಭೇಟಿ ನೀಡಬಹುದು.ಇದು ವರ್ಷಪೂರ್ತಿ ತೆರೆದಿರುತ್ತದೆ.
2. ದೇವಾಲಯಕ್ಕೆ ಪ್ರವೇಶ ಶುಲ್ಕವಿಲ್ಲ
3. ದೇವಸ್ಥಾನವು ಬೆಳಿಗ್ಗೆ ಆರರಿಂದ ಸಂಜೆ ಎಂಟು ಗಂಟೆಯವರಿಗೂ ತೆರೆದಿರುತ್ತದೆ
4. ದೇವಾಲಯ ಮತ್ತು ಆವರಣದ ಒಳಗೆ ಛಾಯಾಗ್ರಹಣವನ್ನು ಅನುಮತಿಸಲಾಗಿದೆ.
5. ದೇವಸ್ಥಾನಕ್ಕೆ ಭೇಟಿ ನೀಡುವಾಗ ಸೂಕ್ತ ಉಡುಪುಗಳನ್ನು ಧರಿಸಿ.

 

Tour Location

 

Leave a Reply

Accommodation
Meals
Overall
Transport
Value for Money