Karnataka logo

Karnataka Tourism
GO UP

ನವಗ್ರಹ ಜೈನ ದೇವಾಲಯ, ಹುಬ್ಬಳ್ಳಿ

separator
ಕೆಳಗೆ ಸ್ಕ್ರಾಲ್ ಮಾಡಿ

ನವಗ್ರಹ ತೀರ್ಥ ಕ್ಷೇತ್ರ ಎಂದೂ ಕರೆಯಲ್ಪಡುವ ಈ ನವಗ್ರಹ ಜೈನ ದೇವಾಲಯವು ಹುಬ್ಬಳ್ಳಿಯ ಸಮೀಪದಲ್ಲಿರುವ ಉತ್ತರ ಕರ್ನಾಟಕದ ಪ್ರಮುಖ ಜೈನ ಯಾತ್ರಾ ಕೇಂದ್ರವಾಗಿದೆ.
ನವಗ್ರಹ ಜೈನ ದೇವಾಲಯವು ಶ್ರೀ 1008 ಭಗವಾನ್ ಪಾರ್ಶ್ವನಾಥನ 61 ಅಡಿ ಏಕಶಿಲೆಯ ವಿಗ್ರಹವನ್ನು ಹೊಂದಿದ್ದು ಎಂಟು ಇತರ ತೀರ್ಥಂಕರರ ಸಣ್ಣ ಪ್ರತಿಮೆಗಳನ್ನು ಹೊಂದಿದ್ದು ಪ್ರತಿ ಪ್ರತಿಮೆಗೆ ಒಂದು ಗ್ರಹದ ಹೆಸರನ್ನು ನೀಡಲಾಗಿದೆ. ಪಾರ್ಶ್ವನಾಥನ ಪ್ರತಿಮೆಯನ್ನು ಎತ್ತರದ ವೇದಿಕೆಯ ಮೇಲೆ ದಳದ ಆಕಾರದ ಅಂಚುಗಳೊಂದಿಗೆ ನಿರ್ಮಿಸಲಾಗಿದೆ. ಪೀಠ ಮತ್ತು ಪ್ರತಿಮೆಯ ಒಟ್ಟು ಎತ್ತರ 33.2 ಮೀಟರ್ ಆಗಿದೆ.

ಸಮೀಪದಲ್ಲಿ ನೋಡತಕ್ಕ ಸ್ಥಳಗಳು : ಸಂಜೀವಿನಿ ಟ್ರೀ ಪಾರ್ಕ್ (33 ಕಿಮೀ), ಅತ್ತಿವೇರಿ ಪಕ್ಷಿಧಾಮ (26 ಕಿಮೀ), ಉತ್ಸವ್ ರಾಕ್ ಗಾರ್ಡನ್ (23 ಕಿಮೀ), ಮತ್ತು ನೃಪತುಂಗ ಬೆಟ್ಟ (20 ಕಿಮೀ) ಇವು ನೀವು ದೇವಾಲಯದ ಹತ್ತಿರ ನೋಡಬಹುದಾದ ಕೆಲವು ಅತ್ಯುತ್ತಮ ಆಕರ್ಷಣೆಗಳಾಗಿವೆ.

ದೇವಸ್ಥಾನವನ್ನು ತಲುಪುವುದು ಹೇಗೆ: ನವಗ್ರಹ ಜೈನ ದೇವಾಲಯವು ವರೂರಿನಲ್ಲಿದೆ, ಹುಬ್ಬಳ್ಳಿಯಿಂದ 16 ಕಿಮೀ ಮತ್ತು ಬೆಂಗಳೂರಿನಿಂದ 392 ಕಿಮೀ ದೂರದಲ್ಲಿದೆ. ಹುಬ್ಬಳ್ಳಿಯೇ ಹತ್ತಿರದ ರೈಲು ಮತ್ತು ವಿಮಾನ ನಿಲ್ದಾಣವನ್ನು ಹೊಂದಿದೆ. ದೇವಸ್ಥಾನವನ್ನು ತಲುಪಲು ಹುಬ್ಬಳ್ಳಿಯಿಂದ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು. ಬಸ್ಸುಗಳೂ ಸಹ ಲಭ್ಯವಿವೆ.
ತಂಗುವ ವ್ಯವಸ್ಥೆ: ಹೋಟೆಲ್‌ಗಳು NH 48 ಬಳಿ ಲಭ್ಯವಿದೆ ಮತ್ತು ಹುಬ್ಬಳ್ಳಿ ನಗರವು ಪ್ರಯಾಣಿಕರಿಗೆ ತಂಗಲು ಬಜೆಟ್, ಮಧ್ಯಮ ಮತ್ತು ಐಷಾರಾಮಿ ಹೋಟೆಲಗಳ ಸೌಲಭ್ಯವನ್ನು ಹೊಂದಿದೆ.

Tour Location

Leave a Reply

Accommodation
Meals
Overall
Transport
Value for Money