Karnataka logo

Karnataka Tourism
GO UP

Author: Meenakshi Gupta

ನಮ್ಮ ಗಂಧದ ನಾಡು ಕರ್ನಾಟಕವು ಪ್ರವಾಸಿಗರಿಗೆ ಬೇಕಾದ ಎಲ್ಲವನ್ನು ಹೊಂದಿದೆ. ಸಂಸ್ಕೃತಿ, ಪರಂಪರೆ, ಇತಿಹಾಸ, ಸಾಹಸ, ವನ್ಯಜೀವಿ ಮತ್ತು ನೈಸರ್ಗಿಕ ಸಮೃದ್ಧಿಯಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಕೆಲವು ಅತ್ಯುತ್ತಮ ಪರ್ವತಗಳು ಮತ್ತು ಶಿಖರಗಳಿಗೆ ನೆಲೆಯಾಗಿದೆ. ಈ ಸುಂದರ ಬೆಟ್ಟಗಳು ಪ್ರಕೃತಿ ಪ್ರೇಮಿಗಳು, ಛಾಯಾಗ್ರಾಹಕರು, ಸಾಹಸ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಅತ್ಯುತ್ತಮ ತಾಣವಾಗಿವೆ.

ನೀವು ಬೆಂಗಳೂರಿನಿಂದ ಮೈಸೂರು ಅಥವಾ ಮಡಿಕೇರಿ ಕಡೆಗೆ ಪ್ರಯಾಣಿಸುವಾಗ ರಾಮನಗರಕ್ಕೆ ಬರಲೇ ಬೇಕು. ರಾಮನಗರವು ಹಲವು ಆಕರ್ಷಣೆಗಳನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ರೇಷ್ಮೆ ಸೀರೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವ ಏಷ್ಯಾ ಮತ್ತು ಭಾರತದಲ್ಲಿ ರೇಷ್ಮೆ ಕೋಕೂನ್‌ಗಳ ಅತಿದೊಡ್ಡ ಮಾರುಕಟ್ಟೆಯಾಗಿ ಪ್ರಸಿದ್ಧವಾಗಿರುವ ರಾಮನಗರವು ‘ಸಿಲ್ಕ್ ಸಿಟಿ’ ಎಂದೂ ಜನಪ್ರಿಯವಾಗಿದೆ.

ಸಕ್ರೆಬೈಲ್ ಆನೆ ಶಿಬಿರವು ಅರಣ್ಯ ಶಿಬಿರವಾಗಿದ್ದು ಇದು ಶಿವಮೊಗ್ಗ ಕೇಂದ್ರ ಕಛೇರಿಯಿಂದ 14 ಕಿಮೀ ದೂರದಲ್ಲಿದೆ ತುಂಗಾ ನದಿಯ ದಡದಲ್ಲಿರುವ ಈ ಸಕ್ರೆಬೈಲ್ ಆನೆ ಶಿಬಿರವು ಕರ್ನಾಟಕ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ. ಈ ಶಿಬಿರವು ವನ್ಯಜೀವಿ ಉತ್ಸಾಹಿಗಳು ಮತ್ತು ಪ್ರವಾಸಿಗರನ್ನು ಮಾತ್ರವಲ್ಲದೆ ಆನೆಗಳ ಬಗ್ಗೆ ಅಧ್ಯಯನ ಮಾಡಲು ಬಯಸುವ ಉತ್ಸಾಹಿಗಳನ್ನು ಆಕರ್ಷಿಸುತ್ತದೆ.

ಕಬಿನಿ ಎಂದರೆ ಎಲ್ಲ ವಯೋಮಾನದವರ ಪ್ರೀತಿಯ ತಾಣವಾಗಿದೆ. ಕಾಡಿನ ಮೌನ, ಪಕ್ಷಿಗಳ ಚಿಲಿಪಿಲಿ, ಕಬಿನಿ ನದಿಯ ಶಾಂತತೆ, ರೋಮಾಂಚನಗೊಳಿಸುವ ಸಫಾರಿಗಳು ಮತ್ತು ವನ್ಯಜೀವಿಗಳನ್ನು ನೋಡುವ ಉತ್ಸಾಹ, ಇವೆಲ್ಲವೂ ಕಬಿನಿಗೆ ಭೇಟಿ ನೀಡಲು ಮುಖ್ಯಕಾರಣಗಳಾಗುತ್ತವೆ.

ಶಿವಮೊಗ್ಗ ಜಿಲ್ಲೆಯು ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ. ಶಿವಮೊಗ್ಗ ಎಂದರೆ ‘ಶಿವ- ಮುಖ’ ಅಥವಾ ‘ಶಿವನ ಮುಖ’ ಎಂದು ನಂಬಲಾಗಿದೆ. ಶಿವಮೊಗ್ಗ ಜಿಲ್ಲೆ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿಸುಮಾರು 300 ಕಿಮೀ ದೂರದಲ್ಲಿದೆ. ತುಂಗಾ ನದಿಯ ದಡದಲ್ಲಿರುವ ಶಿವಮೊಗ್ಗವನ್ನು ಸಾಮಾನ್ಯವಾಗಿ ‘ಮಲೆನಾಡಿಗೆ ಹೆಬ್ಬಾಗಿಲು’ ಎಂದು ಕರೆಯಲಾಗುತ್ತದೆ. ಇದು ಸುಂದರವಾದ ಪ್ರಕೃತಿ ದೃಶ್ಯಗಳು ಮತ್ತು ಆಕರ್ಷಣೀಯ ಪ್ರವಾಸಿತಾಣಗಳನ್ನು

ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 21 ರಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ವೈಜ್ಞಾನಿಕವಾಗಿ, ಈ ದಿನವು ಅನೇಕ ದೇಶಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನದಂದು ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಆಗ ಅದ್ಭುತ ಪರಿವರ್ತನೆ ಉಂಟಾಗುತ್ತದೆ.

ಕರ್ನಟಕ ರಾಜ್ಯವು ಎಲ್ಲ ರೀತಿಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇಲ್ಲಿ ಅನ್ವೇಷಿಸಲು ಸಾಕಷ್ಟು ಪ್ರದೇಶಗಳಿವೆ. ಅಂತೆಯೇ ಶಿವಮೊಗ್ಗವು ತನ್ನ ಭವ್ಯವಾದ ಜೋಗ ಜಲಪಾತಕ್ಕೆ ಹೆಸರುವಾಸಿಯಾಗಿದ್ದರೂ, ಇಲ್ಲಿ ಪ್ರವಾಸಿಗರುಭೇಟಿ ನೀಡಲೇಬೇಕಾದ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಅಂತಹ ಒಂದು ಸ್ಥಳವೆಂದರೆ ಪ್ರಾಚೀನ ಕೆಳದಿ ರಾಮೇಶ್ವರ ದೇವಾಲಯ.

ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದು ಇಂದಿಗೂ ಎಪ್ಪತ್ತೈದು ವಸಂತಗಳು ಕಳೆದಿವೆ. ಈ ಅಮೋಘ ಸಂದರ್ಭವನ್ನು ಸ್ಮರಣೀಯವಾಗಿಸಲು ಭಾರತದ ಎಲ್ಲ ರಾಜ್ಯಗಳಲ್ಲಿ ಸ್ವಾತಂತ್ಯದ ಅಮೃತ ಮಹೋತ್ಸವ ಎಂಬ ಶೀರ್ಷಿಕೆ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕರ್ನಾಟಕವೂ ತನ್ನ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು :ಸ್ವಾತಂತ್ಯದ ಅಮೃತ ಮಹೋತ್ಸವದ ಅಡಿಯಲ್ಲಿ ನೆನೆಪಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ. ಇತರ ರಾಜ್ಯಗಳಂತೆ ಕರ್ನಾಟಕವೂ

ನೀವು ಸಾಹಸಿಯೇ? ನೀವು ಜಲ ಕ್ರೀಡೆಗಳು ಮತ್ತು ಜಲ ಚಟುವಟಿಕೆಗಳನ್ನು ಇಷ್ಟಪಡುತ್ತೀರಾ? ಉತ್ತರ ಹೌದು ಎಂದಾದರೆ, ನೀವು ಸ್ಕೂಬಾ ಡೈವಿಂಗ್ ಅನ್ನು ಪ್ರಯತ್ನಿಸಬೇಕು. ಸ್ಕೂಬಾ ಡೈವಿಂಗ್ ಭಾರತದಲ್ಲಿ ಹೆಚ್ಚಿನ ವೇಗದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ನೀವು ಸ್ಕೂಬಾ ಡ್ರೈವಿಂಗ್ ಮೂಲಕ ನೀರೊಳಗಿನ ಹವಳದ ಬಂಡೆಗಳು, ಸಸ್ಯ ಮತ್ತು ಪ್ರಾಣಿಗಳು, ವರ್ಣರಂಜಿತ ಮೀನುಗಳು, ಸಮುದ್ರ ಆಮೆಗಳು, ಗ್ರೇಟ್ ಬರ್ರಾಕುಡಾಸ್, ಬಿಳಿ

ಬೆಂಗಳೂರು ನಗರವು ಕಳೆದ 2 ದಶಕಗಳಲ್ಲಿ ಐಟಿ ಕ್ಷೇತ್ರ ಮತ್ತು ಮೂಲಸೌಕರ್ಯದಲ್ಲಿ ಅದರ ಅಭಿವೃದ್ಧಿಗಾಗಿ ಭಾರತದ ಸಿಲಿಕಾನ್ ಸಿಟಿ ಎಂದು ಜನಪ್ರಿಯವಾಗಿದೆ. ಆದಾಗ್ಯೂ ಹೆಚ್ಚಿನ ಅಂತರರಾಷ್ಟ್ರೀಯ ಬ್ರಾಂಡ್‌ಗಳ ಉಪಸ್ಥಿತಿಯೊಂದಿಗೆ ಆಧುನಿಕ ಐಷಾರಾಮಿ ನಗರವು ತನ್ನ ಪರಂಪರೆಯ ಹೊಳಪನ್ನು ಕಳೆದುಕೊಂಡಿಲ್ಲ.