Karnataka logo

Karnataka Tourism
GO UP
Makar Sankranti

ಮಕರ ಸಂಕ್ರಾಂತಿ

separator
  /  ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿಯನ್ನು ಅನುಸರಿಸಿ, ಪ್ರತಿವರ್ಷ ಜನವರಿ ಅಂತ್ಯವು ದೀರ್ಘ ದಿನಗಳ ಪ್ರಾರಂಭವನ್ನು ಸೂಚಿಸುತ್ತದೆ. ಹಿಂದಿನ ಕಾಲದಿಂದಲೂ , ಈ ಸಂದರ್ಭವನ್ನು ಭಾರತ ಮತ್ತು ನೇಪಾಳದಲ್ಲಿ ಸುಗ್ಗಿಯ ಹಬ್ಬ ಅಥವಾ ಮಕರ ಸಂಕ್ರಾಂತಿಯಾಗಿ ಆಚರಿಸಲಾಗುತ್ತದೆ. ಮಾಘಿ ಎಂದೂ ಕರೆಯಲ್ಪಡುವ ಈ ಹಬ್ಬದ ದಿನವನ್ನು ಸೂರ್ಯನ ಪೂಜೆಗೆ ಮೀಸಲಾಗಿಡಲಾಗಿದೆ. ಚಂದ್ರನ ಚಲನೆಯನ್ನು ಅನುಸರಿಸುವ ಹೆಚ್ಚಿನ ಹಬ್ಬಗಳಿಗಿಂತ ಭಿನ್ನವಾಗಿ ಮಕರ ಸಂಕ್ರಾಂತಿಯು ಸೌರ ಚಕ್ರವನ್ನು ಅನುಸರಿಸುತ್ತದೆ. ಆದ್ದರಿಂದ  ಈ ಹಬ್ಬವನ್ನು ಪ್ರತಿ ವರ್ಷ ಹೆಚ್ಚುಕಡಿಮೆ ಒಂದೇ ದಿನದಂದು ಆಚರಿಸಲಾಗುತ್ತದೆ. ಮಕರ ರಾಶಿಗೆ ಸೂರ್ಯನ ಚಲನೆಯನ್ನು ಪರಿಗಣಿಸಿ, 2021 ರ ಮಕರ ಸಂಕ್ರಾಂತಿಯನ್ನು ಜನವರಿ 14 ರಂದು ಆಚರಿಸಲಾಗುವುದು.

ಕರ್ನಾಟಕದಲ್ಲಿ ಮಕರ ಸಂಕ್ರಾಂತಿ:

ಮಕರ ಸಂಕ್ರಾಂತಿಯ ಹಬ್ಬದ ಉತ್ಸವಕ್ಕೆ ಕರ್ನಾಟಕ ರಾಜ್ಯವು  ಸಜ್ಜಾಗುವುದರೊಂದಿಗೆ, “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಎಂಬುದು ಪ್ರಚಲಿತದಲ್ಲಿರುವ ಕನ್ನಡದ ಮಾತಾಗಿದೆ. ಇದರರ್ಥ ಒಬ್ಬರು ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ತಿನ್ನಬೇಕು ಮತ್ತು ಒಳ್ಳೆಯ ಮಾತುಗಳನ್ನು ಹೇಳಬೇಕು. ಈ ಮಾತು ‘ಎಳ್ಳು ಬೀರೋದು’ ಎಂಬ ಬಹಳ ಮುಖ್ಯವಾದ ಸಂಪ್ರದಾಯವನ್ನು ಅನುಸರಿಸುತ್ತದೆ. ಮಹಿಳೆಯರು ಮತ್ತು ಮಕ್ಕಳು ಮನೆ-ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು ಮತ್ತು ಬೆಲ್ಲದ ಮಿಶ್ರಣ ಮತ್ತು ಸಕ್ಕರೆ ಅಚ್ಚನ್ನು ಒಳಗೊಂಡಿರುವ ತಟ್ಟೆಗಳನ್ನು ಬದಲಿಸಿಕೊಳ್ಳುತ್ತಾರೆ. ಈ ಸಂಪ್ರದಾಯವು ಸಂತೋಷವನ್ನು ಹಂಚಿಕೊಳ್ಳುವ ಮತ್ತು ಹರಡುವ ಗುಣಗಳನ್ನು ಸಂಕೇತಿಸುತ್ತದೆ. ಜನರು ತಮ್ಮ ಮನೆಗಳನ್ನು ಸ್ವಚಗೊಳಿಸುತ್ತಾರೆ, ಮಾವಿನ ಎಲೆಗಳನ್ನು ತಮ್ಮ ಮನೆಗಳ  ಬಾಗಿಲಿಗೆ  ಕಟ್ಟುತ್ತಾರೆ, ಹೊಸ ಬಟ್ಟೆಗಳನ್ನು ಧರಿಸಿ ದೇವರನ್ನು ಪ್ರಾರ್ಥಿಸುತ್ತಾರೆ. ಪ್ರಾರ್ಥನೆಗಳು ಮನೆಯಲ್ಲಿ ಮಾತ್ರವಲ್ಲ ದೇವಾಲಯಗಳಲ್ಲಿಯೂ ನಡೆಯುತ್ತವೆ.

ಮಕರ ಸಂಕ್ರಾಂತಿಯ ಸಮಯದಲ್ಲಿ ಇತರ ಚಟುವಟಿಕೆಗಳು:

ಮಕರ ಸಂಕ್ರಾಂತಿಗೆ ಸಂಬಂಧಿಸಿದ ಸಾಮಾಜಿಕ ಉತ್ಸವಗಳೆಂದರೆ ಬಣ್ಣಬಣ್ಣದ ಅಲಂಕಾರಗಳು, ಹಾಡುಗಾರಿಕೆ ಮತ್ತು ನೃತ್ಯ, ಗಾಳಿಪಟ ಹಾರಿಸುವುದು, ದೀಪೋತ್ಸವಗಳು, ರಂಗೋಲಿ ಬಿಡಿಸುವುದು ಮತ್ತು ಕೆಲವೊಮ್ಮೆ ಕುಸ್ತಿ (ಕುಸ್ತಿ). ಕರ್ನಾಟಕದ ಮತ್ತೊಂದು ಹಳೆಯ ಆಚರಣೆಯೆಂದರೆ, ಜನರು ತಮ್ಮ ಹಸು ಮತ್ತು ದನಗಳನ್ನು ಹೊಳೆಯುವ ವೇಷಭೂಷಣಗಳು ಮತ್ತು ಆಭರಣಗಳಿಂದ ಅಲಂಕರಿಸುತ್ತಾರೆ ಮತ್ತು ಬೆಂಕಿಯ ದೊಡ್ಡ ಹಳ್ಳವನ್ನು ದಾಟುವಂತೆ ಮಾಡುತ್ತಾರೆ. ದನಗಳ ಈ ಪ್ರದರ್ಶನವನ್ನು ಸ್ಥಳೀಯವಾಗಿ ‘ಕಿಚ್ಚು ಹಾಯಿಸೋದು’ ಎಂದು ಕರೆಯಲಾಗುತ್ತದೆ. ಈ ಚಟುವಟಿಕೆಗಳು ಸಂತೋಷ ಮತ್ತು ಉಲ್ಲಾಸದ ವಾತಾವರಣವನ್ನು ಸೃಷ್ಟಿಸುತ್ತದೆ  

ಮಕರ ಸಂಕ್ರಾಂತಿ ಹಬ್ಬದ ಭಕ್ಷ್ಯಗಳು:

ಮಕರ ಸಂಕ್ರಾಂತಿಯಂತೆ ಭಾರತದಲ್ಲಿ ಯಾವುದೇ ಹಬ್ಬವು ಸಹ ಅದರ ವಿಶೇಷ  ಭಕ್ಷ್ಯ ಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ, ಈ ಹಬ್ಬದ ಸಮಯದಲ್ಲಿ ಪೊಂಗಲ್, ಕಾಯಿಸಿದ ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿದ ಅನ್ನವು ಎಲ್ಲರೂ ಸಿದ್ಧಪಡಿಸಿ ಸಂಭ್ರಮಿಸಿ ತಿನ್ನುವಂತಹ ಖಾದ್ಯವಾಗಿದೆ. ಇತರ ಹಬ್ಬದ ಭಕ್ಷ್ಯಗಳಲ್ಲಿ ನಿಂಬೆಹಣ್ಣಿನ ಚಿತ್ರಾನ್ನ ಮತ್ತು ಹುಳಿ ಅನ್ನ, ವಡೆಗಳು, ತರಕಾರಿ ಗೊಜ್ಜುಗಳು ಮತ್ತು ಪಾಯಸ (ಸಿಹಿಯಾದ ಅಕ್ಕಿ ಪುಡಿಂಗ್) ಸೇರಿವೆ.

“ನಮ್ಮ ಆಹಾರ ಬೆಳೆಯುವ ಭೂಮಿಗೆ ಕೃತಜ್ಞರಾಗಿರಬೇಕು ಮತ್ತು ಒಗ್ಗಟ್ಟಾಗಿರಬೇಕು ಮತ್ತು ಸಂತೋಷಪಡಬೇಕು” ಎಂಬುದು ಮಕರ ಸಂಕ್ರಾಂತಿಯ ಸಂಕೇತವಾಗಿದೆ. ಈ ಹಬ್ಬವು ಜನರಲ್ಲಿ  ಉದಾರತೆ, ಸಾಮರಸ್ಯ, ಕೃತಜ್ಞತೆ ಮತ್ತು ಪ್ರೀತಿಯನ್ನು ತರುತ್ತದೆ.