Karnataka logo

Karnataka Tourism
GO UP
Biking in Karnataka

ಕರ್ನಾಟಕದಲ್ಲಿ ಬೈಕಿಂಗ್

separator
  /  ಕರ್ನಾಟಕದಲ್ಲಿ ಬೈಕಿಂಗ್

ಕರ್ನಾಟಕದಲ್ಲಿ ಬೈಕಿಂಗ್: ರ್ನಾಟಕವು ಅದ್ಭುತವಾದ ಪ್ರಕೃತಿಯ ಸಂಪತ್ತನ್ನು ಹೊಂದಿದೆ. ಇಲ್ಲಿರುವ ಸುಂದರ ಸ್ಥಳಗಳಿಗೆ ನೀವು ಬೈಕ್ ಪಯಣದ ಮೂಲಕ ಭೇಟಿ ನೀಡಬಹುದು. ಕರ್ನಾಟಕವು ಹಲವಾರು ಬೆಟ್ಟಗಳು, ಕಡಲತೀರಗಳು, ಕೋಟೆಗಳು, ಜಲಪಾತಗಳು, ಕಾಡುಗಳು, ವನ್ಯಜೀವಿ ಅಭಯಾರಣ್ಯಗಳು ಇತ್ಯಾದಿಗಳನ್ನು ಹೊಂದಿದ್ದು ವಾರಾಂತ್ಯದ ಗೇಟ್‌ವೇಗಳು ಮತ್ತು ದಿನದ
ಪ್ರವಾಸಗಳಿಗೆ ಸೂಕ್ತವಾಗಿದೆ. ನಿಮ್ಮ ಸಾಹಸಮಯ ಬೈಕ್ ಪಯಣವು ನಿಮಗೆ ಸುಂದರಮಯವಾದ ಜೀವನ ಅನುಭವವನ್ನು ನೀಡುತ್ತದೆ.

ವಾರವಿಡೀ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳಿಂದ ನಮಗೆ ಒತ್ತಡ ಉಂಟಾಗಿರುತ್ತದೆ. ನಮ್ಮ ಮನಸ್ಸು ಗೊಂದಲದ ಗೂಡಾಗಿರುತ್ತದೆ. ಆಗ ನಾವು ಕೈಗೊಳ್ಳುವ ಬೈಕ್ ಪ್ರಯಾಣವು ನಮ್ಮ ಮನಸ್ಸು ಮತ್ತು ಆತ್ಮವನ್ನು ರಿಫ್ರೆಶ್ ಮಾಡುತ್ತದೆ ಕರ್ನಾಟಕದಲ್ಲಿ ಬೈಕ್ ಸವಾರಿಗೆ ನೀವು ಆಯ್ಕೆ ಮಾಡಬಹುದಾದ ತಾಣಗಳ ಪಟ್ಟಿ ಇಲ್ಲಿದೆ.

Nani Hills Bike Destinations
ನಂದಿ ಬೆಟ್ಟಗಳು

ಬೆಂಗಳೂರಿನಿಂದ ಕೇವಲ 61 ಕಿಲೋಮೀಟರ್ ದೂರದಲ್ಲಿರುವ ನಂದಿ ಬೆಟ್ಟಗಳು ವಿಹಂಗಮ ನೋಟಕ್ಕೆ ಹೆಸರುವಾಸಿಯಾಗಿದೆ. ಇದು ಕಿರಿದಾದ, ತಿರುಚಿದ ರಸ್ತೆಗಳನ್ನು ಹೊಂದಿರುವುದರಿಂದ ನಿಮ್ಮ ಬೈಕಿಂಗ್ ಪ್ರಯಾಣವನ್ನು ಸಾಹಸ ಮತ್ತು ಆನಂದಮಯವಾಗಿಸುತ್ತದೆ.

Hampi
ಹಂಪಿ

ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಐತಿಹಾಸಿಕ ಹಂಪಿಯು ಕರ್ನಾಟಕದ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ವಿಜಯನಗರ ಸಾಮ್ರಾಜ್ಯದ ಕುತುಹೂಲಕಾರಿ ಅವಶೇಷಗಳು, ಕಮಲ್ ಮಹಲ್ ಐತಿಹಾಸಿಕ ಸ್ಥಳಗಳು, ಅದ್ಭುತ ದೇವಾಲಗಳು ಇಲ್ಲಿನ ಗತವೈಭವನ್ನು ಸಾರುತ್ತವೆ. ನೀವು ಹಂಪೆಗೆ ಬಂದಾಗ ವಿರೂಪಾಕ್ಷ ದೇವಸ್ಥಾನ ಮತ್ತು ಸಪ್ತ ಸುರರಾಗಳನ್ನು ಪ್ರತಿನಿಧಿಸುವ ಸಂಗೀತ ಸ್ತಂಭವನ್ನು ಹೊಂದಿರುವ ವಿಜಯ ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ.

Biking in Karnataka bheemeshwari
ಭೀಮೇಶ್ವರಿ

ನೀವು ಸಾಹಸಮಯ ಸವಾರಿಗಳನ್ನು ಪ್ರೀತಿಸುತ್ತಿದ್ದರೆ, ನೀವು ಕಾವೇರಿ ತೀರದಲ್ಲಿರುವ ಭೀಮೇಶ್ವರಿಯನ್ನು ಭೇಟಿ ಮಾಡಬೇಕು. ಇದು ಹಲವಾರು ಜಲಕ್ರೀಡೆಗಳ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ಕಾಡಿನಲ್ಲಿ ಕೆಲವು ವಸತಿಗೃಹಗಳ ಸೌಲಭ್ಯವಿದ್ದು ನೀವು ಇಲ್ಲಿ ರಾತ್ರಿಯನ್ನು ಸುರಕ್ಷಿತವಾಗಿ ಕಳೆಯಬಹುದು.

chikmagalur hills
ಚಿಕ್ಕ ಮಗಳೂರು

ಕಾಫಿ ಪ್ರಿಯರ ನಾಡಾಗಿರುವ ಚಿಕ್ಕಮಗಳೂರನ್ನು ಕರ್ನಾಟಕದ ಕಾಫಿ ಜಿಲ್ಲೆ ಎಂದು ಕರೆಯಲಾಗುತ್ತದೆ. ಬೆರಗುಗೊಳಿಸುವ ಬೆಟ್ಟಗಳು ಮತ್ತು ಕಣಿವೆಗಳಿಂದ ತುಂಬಿರುವ, ಪ್ರಕೃತಿಯ ಮಡಿಲಲ್ಲಿರುವ ಈ ಪ್ರಶಾಂತ ಪಟ್ಟಣಕ್ಕೆ ಪ್ರಕೃತಿಯ ನಡುವೆ ಉತ್ತಮ ವಾಸ್ತವ್ಯವನ್ನು ಇಷ್ಟಪಡುವ ಪ್ರತಿಯೊಬ್ಬರೂ ಭೇಟಿ ನೀಡಲೇಬೇಕು.. ಭದ್ರಾ ನದಿಯಲ್ಲಿ ಚಾರಣದಿಂದ ಹಿಡಿದು ಮುಳ್ಳಯ್ಯನಗಿರಿಗೆ ರಿವರ್ ರಾಫ್ಟಿಂಗ್‌ವರೆಗೆ ಇಲ್ಲಿ ಬಹಳಷ್ಟು ಚಟುವಟಿಕೆಗಳನ್ನು ಮಾಡಬಹುದು, ಚಿಕ್ಕಮಗಳೂರು ನಗರ ಜೀವನದ ದಿನ ನಿತ್ಯದ ಗದ್ದಲದಿಂದ ಹೊರಬರಲು ಹಂಬಲಿಸುವ ಒಂಟಿ ಪ್ರಯಾಣಿಕರಿಗೆ ಅದ್ಭುತ ಸ್ಥಳವಾಗಿದೆ.

Biking in Karnataka ranganathittu bird sanctuary
ರಂಗನತಿಟ್ಟು ಪಕ್ಷಿ ಧಾಮ

ರಂಗನತಿಟ್ಟು ಪಕ್ಷಿಧಾಮವು ಕರ್ನಾಟಕದಲ್ಲಿ ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ಅತ್ಯಂತ ಜನಪ್ರಿಯ ತಾಣವಾಗಿದೆ. ಇದು ಬೆಂಗಳೂರಿನಿಂದ 131 ಕಿಲೋಮೀಟರ್ ದೂರದಲ್ಲಿದೆ ಮತ್ತು ವಾರಾಂತ್ಯದ ವಿಹಾರಕ್ಕೆ ಸೂಕ್ತವಾಗಿದೆ. ಅಭಯಾರಣ್ಯದಲ್ಲಿ ಸುಮಾರು 170 ವಿವಿಧ ಜಾತಿಯ ಪಕ್ಷಿಗಳನ್ನು ಕಾಣಬಹುದು.

Biking in Karnataka
ಹೋಗೆನಕಲ್ ಜಲಪಾತ

ಭಾರತದ ನಯಾಗರ ಜಲಪಾತ ಎಂದು ಹೆಸರುವಾಸಿ ಆಗಿರುವ ಹೊಗೇನಕಲ್ ಜಲಪಾತವು ಬೆಂಗಳೂರಿನಿಂದ 126 ಕಿಲೋಮೀಟರ್ ದೂರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿದೆ. ಹೊಗೇನ್ ಕಲ್ ಜಲಪಾತವು ಪಿಚ್-ಕಪ್ಪು ಕಾರ್ಬೊನೈಟ್ ಕಲ್ಲುಗಳ ಮೇಲೆ ಧುಮ್ಮಿಕ್ಕುತ್ತವೆ. ಈ ನಯನ ಮನೋಹರ ದೃಶ್ಯವು ಪ್ರವಾಸಿಗರನ್ನು
ಮಂತ್ರಮುಗ್ಧಗೊಳಿಸುತ್ತದೆ.

ಮೇಲಿನ ಸ್ಥಳಗಳನ್ನು ಹೊರತುಪಡಿಸಿ, ಮಡಿಕೇರಿ, ಅವಲಬೆಟ್ಟ, ಸ್ಕಂದಗಿರಿ, ಮಂಚಾಲಬೆನೆ ಅಣೆಕಟ್ಟು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇತ್ಯಾದಿಗಳನ್ನು ನೀವು ಕರ್ನಾಟಕದಲ್ಲಿ ಬೈಕಿಂಗ್‌ಗಾಗಿ ಆಯ್ಕೆ ಮಾಡಬಹುದು.

ಬೆಂಗಳೂರಿನಿಂದ ಹಂಪಿಗೆ

Stay

ದಾರಿಯಲ್ಲಿ ಹೋಗಬೇಕು - ಸ್ಥಳಗಳಿಗೆ ಭೇಟಿ ನೀಡಿ

  • ಶ್ರೀ ಸಿದ್ದಗಂಗಾ ಮಠ (70 ಕಿಮೀ)
  • ಚಿತ್ರದುರ್ಗ ಕೋಟೆ (200 ಕಿಮೀ)
  • ಹೊಸಪೇಟೆ (326 ಕಿಮೀ)

ತಿನ್ನಲು ಸ್ಥಳಗಳು

  • ಬೆಂಗಳೂರಿನಿಂದ ತುಮಕೂರು (70 ಕಿಮೀ) ಬೆಳಗಿನ ಉಪಾಹಾರಕ್ಕೆ ಪ್ರಸಿದ್ಧವಾಗಿದೆ, ಇದು ತಟ್ಟೆ ಇಡ್ಲಿಯನ್ನು ನೀಡುತ್ತದೆ.
  • ದೋಸೆ ಮತ್ತು ಕಾಫಿಗೆ ಹೆಸರುವಾಸಿಯಾಗಿರುವ ಚಿತ್ರದುರ್ಗದಲ್ಲಿ (200 ಕಿಮೀ) ಊಟಕ್ಕೆ ನಿಲ್ಲಿಸಿ.
  • ಹೊಸಪೇಟೆ (326 ಕಿಮೀ) ಸ್ನ್ಯಾಕ್ಸ್‌ಗಾಗಿ ನಿಲ್ಲಿಸಬೇಕಾದ ಸ್ಥಳವಾಗಿದೆ ಇದು ರುಚಿಕರವಾದ ವಾಂಗಿಬಾತ್, ಗಜಾರ್ ಕಾ ಹಲ್ವಾವನ್ನು ಒದಗಿಸುತ್ತದೆ.